ಕೇಂದ್ರ ಬಜೆಟ್ನಲ್ಲಿ ರಾ ಜ್ಯಕ್ಕೆ ಚೊಂಬು ಕೊ ಟ್ಟಿದ್ದಾರೆ: ಸಿಎಂ ಸಿದ್ದರಾ ಮಯ್ಯ ಯು ಪಿ, ಬಿಹಾ ರ, ಗುಜರಾತ್ ರಾಜ್ಯದ ಬಜೆಟ್; ಉತ್ತರ ಭಾರತಕ್ಕೆ ಮಣೆ: ದಕ್ಷಿಣ ಭಾರತ ಕಡೆಗಣನೆ

ಕಲಬು ರಗಿ : ಫೆ.1ರ ಭಾನುವಾರ ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಾದ ಕೇಂ ದ್ರದ 2026-27 ನೇ ಸಾಲಿನ ಮುಂಗಡ ಪತ್ರದಲ್ಲಿ ಕರ್ನಾಟಕ ರಾಜ್ಯಕ್ಕೆ ಚೊಂಬು ನೀಡಲಾಗಿದೆ ಎಂದು ಸಿಎಂ ಸಿದ್ದರಾ ಮಯ್ಯ ಟೀಕಿಸಿದರು .
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಕೇಂದ್ರದ ಮುಂಗಡ ಪತ್ರ ಉತ್ತರ ಪ್ರದೇಶ, ಬಿಹಾ ರ ಹಾಗೂ ಗುಜರಾತ್ ರಾಜ್ಯಗಳ ಬಜೆಟ್ ಆಗಿದ್ದು , ದಕ್ಷಿಣ ಭಾರತ ಸಂಪೂರ್ಣ ಕಡೆಗಣಿಸಲಾ ಗಿದೆ ಎಂದು ವಾಗ್ದಾಳಿ ನಡೆಸಿದರು .
ಈ ಬಜೆಟ್ ಬಹಳ ಸಂ ಪೂ ರ್ಣ ನಿರಾಶಾ ದಾ ಯಕ, ದೂರ ದೃಷ್ಟಿ ಇಲ್ಲದ, ಬರೀ ಹೇಳಿಕೆಗಳಿಂದ ಕೂಡಿದ ಬಜೆಟ್ ಆಗಿದೆ. ರಾ ಜ್ಯಕ್ಕೆ ಏನೇ ನೂ ಕೊ ಟ್ಟಿಲ್ಲ. ಒಂದೇ ಒಂದು ಅಂದರೆ ಬೆಂಗಳೂರು ಟು ಹೈದ್ರಾಬಾದ್, ಬೆಂಗಳೂರು ಟು ಚೆನ್ನೈ ಹೈ ಸ್ಪೀ ಡ್ ಟ್ರೈ ನ್ ಕೊಟ್ಟಿದ್ದಾರೆ. ಆದರೆ
ಇದರಿಂದ ನಮಗಿಂತ ಆಂ ದ್ರಪ್ರದೇ ಶ ಹಾಗೂ ತಮಿಳು ನಾ ಡಿನವರಿಗೆ ಅನು ಕೂ ಲ ಆಗು ತ್ತದೆ. ನಾ ವು ಬೆಂಗಳೂರಿನಿಂದ ಮುಂಬೈ ,ಬೆಂಗಳೂ ರುಟು ಪುಣೆ, ಬೆಂಗಳೂರು ಟು ಮಂಗಳೂ ರು ಹೈ ಸ್ಪೀ ಡ್ ಟ್ರೈ ನ್ ಕೇ ಳಿದ್ವಿ ಎಂದು ಸಿಎಂ ಹೇಳಿದರು .
ವಿಕಸಿತ ಭಾರತದ ಬಗ್ಗೆ ಬಹಳ ಮಾತಾಡಿದ್ದಾರೆ. ಇದೆಲ್ಲಾ ಮಾ ತಿನಲ್ಲಿ ಇದೆಯೇ ಹೊರತು ಕೃತಿಗೆ ಇಳಿದಿಲ್ಲ. ನಾವು ನಮ್ಮ ರಾಜ್ಯದ ನೀ ರಾ ವರಿ ಯೋ ಜನೆ ಬಗ್ಗೆ ಕೇ ಳಿದ್ದೆವು . ಪ್ರಮು ಖವಾ ಗಿ ಕೃಷ್ಣಾ ಮೇ ಲ್ದಂ ಡೆ ಯೋಜನೆ ರಾಷ್ಟ್ರೀಯ ಯೋ ಜನೆ ಮಾ ಡಿ ಎಂದು ಕೇಳಲಾಗಿತ್ತು .
23-24 ಬಜೆಟ್ ನಲ್ಲಿ 5300 ಕೋ ಟಿ ಕೊ ಡ್ತಿವಿ  ಅಂತ ಘೋಷಣೆ ಮಾಡಿದ್ದರು . ಇದನ್ನಾದರೂ ಕೊಡಿ ಅಂತ ಕೇ ಳಿದ್ವಿ. ಘೋ ಷಿಸಿ 3 ಬಜೆಟ್ ಆದ್ರೂ 1 ರೂಪಾಯಿ ಕೊಟ್ಟಿಲ್ಲ ಎಂದು ವಿವರಣೆ ನೀಡಿದರು.ಕಬ್ಬು, ತೊಗರಿ, ಬೇ ಳೆ ಕಾ ಳು ಗಳಿಗೆ ಎಂ .ಎಸ್.ಪಿ. ಹೆಚ್ಚಳ ಹಾ ಗೂ ಸಹಾ ಯ ಕೇ ಳಿದ್ವಿ ಅದನ್ನೂ ಮಾ ಡಿಲ್ಲ. 14ನೇ ಹಣಕಾ ಸಿನ ಆಯೋ ಗದಲ್ಲಿ ಕರ್ನಾ ಟಕಕ್ಕೆ ಬಂದಿದ್ದ ಪಾಲು ಶೇ . 4.71 % ಮಾ ತ್ರ. ಆದರೆ 15ನೇ ಹಣಕಾ ಸು ಆಯೋ ದಲ್ಲಿ 3.64 % ಮಾ ತ್ರ. ಆದರೆ ಕನಿಷ್ಠ  4.71 ಆದ್ರೂ ಕೊಡಿ. ಅಂತ ಒತ್ತಾ ಯ ಮಾ ಡಿದ್ದೆವು . 14ನೇ ಹಣಕಾ ಸಿನ ಆಯೋ ಗದಕ್ಕಿಂತ ಜಾಸ್ತಿ ಮಾಡಲು ಕೇಳಿದ್ವಿ. 4.131 ರಷ್ಟು ಮಾತ್ರ ಈಗ ಕೊ ಡಲಾ ಗಿದೆ. ಇದು ರಾಜ್ಯಕ್ಕೆ ದೊ ಡ್ಡ ಅನ್ಯಾಯ ಎಂದು ಬಲವಾಗಿ ಟೀಕಿಸಿದರು .
ಬಿಹಾರಗೆ ಶೇ . 9.948 ಅನು ದಾನ ನೀಡಿದೆ. ಉತ್ತರ ಪ್ರದೇಶಕ್ಕೆ ಶೇ . 17.619, ಗು ಜರಾ ತ್ ಗೆ ಶೇ 3.756, ಓಡಿಸ್ಸಾ ಗೆ ಶೇ 4.41, ರಾ ಜಸ್ಥಾ ನ ಶೇ 5.926, ಆಂದ್ರಪ್ರ ದೇಶದ ಶೇ 4.217 ರಷ್ಟು ನೀಡಿದೆ. ಅವರಿಗೆ ಕೊ ಡಬೇಡಿ ಅಂತ ಇಲ್ಲ.. ಅವರಿಗೂ ಕೊ ಡಿ.. ನಮಗೂ ನ್ಯಾಯ ಕೊಡಿ ಅನ್ನೋದು ನಮ್ಮ ವಾದ. ಪಿಎಂಗೂ ಭೇಟಿ ಮಾಡಿ ನಮಗೆ ನ್ಯಾಯ ಕೊಡಲು ಕೇಳಿದ್ದೆಎಂ ದು ಸಿಎಂ ಹೇ ಳಿದರು .

ನಮ್ಮ ಮೆಟ್ರೋ ಗೆ ನೆರವು ಕೊ ಟ್ಟಿಲ್ಲ. ಏಮ್ಸ್ ಕೊ ಟ್ಟಿಲ್ಲ, ಕಲ್ಯಾ ಣ ಕರ್ನಾ ಟಕಕ್ಕೆ ಅದರಲ್ಲೂ ಕೆಕೆ ಆರ್ ಡಿಬಿ ಅನು ದಾನ ಕೇಳಿದ್ವಿ ಕೊಟ್ಟಿಲ್ಲ. ಇದರ ಬಗ್ಗೆ ಒಂದೆ ಒಂದು ಶಬ್ದ ಇಲ್ಲ. ನಾ ವು ಅಧಿಕಾ ರಕ್ಕೆ ಬಂದ ಮೇ ಲೆ 2.5 ವರ್ಷ ದಲ್ಲಿ 13 ಸಾ ವಿರ ಕೋ ಟಿ ಕಲ್ಯಾ ಣ ಕರ್ನಾ ಟಕ ಅಭಿವೃದ್ಧಿಗೆ ಕೊ ಟ್ಟಿದ್ದೇ ವೆ ಎಂದರು.  ವರ್ಷಕ್ಕೆ ನಾ ವು ಕೇಂದ್ರಕ್ಕೆ ತೆರಿಗೆ ಕೊಡೋ ದು 4.5 ರಿಂ ದ 5 ಲಕ್ಷ ಕೋ ಟಿ. ಒಂದು ರೂ ಪಾ ಯಿ ಕೊ ಟ್ಟರೆ ನಮಗೆ ವಾ ಪಾ ಸ್ ಬರೋ ದು 14 ಪೈ ಸೆ ಮಾ ತ್ರ. ಉಳಿದಿದ್ದೇ ಲ್ಲಾ ಕೇಂದ್ರ ಸರಕಾ ರವೇ ಬಳಸಿಕೊಳ್ಳು ತ್ತಿದೆ. ಹಾಗಾ ಗಿ ನಮ್ಮ ರಾಜ್ಯಕ್ಕೆ ಕೇಂ ದ್ರ ಬಜೆಟ್ ನಿಂದ ದೊ ಡ್ಡ ಅನ್ಯಾಯವಾ ಗಿದೆ. ಒಟ್ಟಾರೆ ಕೇಂದ್ರ ಸರಕಾರ ನಮ್ಮ ರಾಜ್ಯಕ್ಕೆ ಚೊಂಬು ಕೊಟ್ಟಿದೆ ಎಂದು ಸಿಎಂ ಪುನರುಚ್ಚರಿಸಿದರು .

Related Articles

Leave a Reply

Your email address will not be published. Required fields are marked *

Back to top button